ಸತ್ಯ

ಕಲ್ಲು ಮುಳ್ಳಿನ ಹಾದಿ ಸವೆದ
ಬದುಕು ಅಳೆಯಲಾರದ ಕಾಲ
ಇಂದು ನಿನ್ನೆಯ ನೆನಪುಗಳ ಬಂಧಿ
ಬಯಕೆಗಳ ನಾಳೆಗಳ ಆಲಂಗಿಸು
ಜೀವ ಎಂದೂ ಹಿಮ್ಮುಖವಾಘಿ ಚಲಿಸುವದಿಲ್ಲ.

ದುಃಖದ ಸೆರಗಿನಲಿ ಸುಖದ ಮುಖ
ತಕ್ಕಡಿ ತೂಗಿದಂತೆ ಸಮ ಸಮ
ಆತ್ಮಗಳು ಮುಲುಕಾಡಿ ವಿರಮಿಸುತ್ತವೆ
ತಮ್ಮ ಮನೆಗಳು ಸ್ವಂತ ಆಲೋಚನೆಗಳು
ಸಮುದ್ರದ ಬದುಕು ಎಂದೂ ಖಾಲಿಯಾಗುವದಿಲ್ಲ.

ಮೊಗೆ ಮೊಗೆದು ಕುಡಿದ ಖುಷಿಯ ಭಾವಿ
ಎಂದೋ ಒಮ್ಮೆ ಕಂಬನಿಗಳಿಂದ ತುಂಬಿತ್ತು.
ಊಟದ ಅನ್ನ ಅರಳುವುದು ಅವರಿವರ
ಶ್ರಮದ ಕೈಗಳು ಸುಃಖ ದುಃಖ
ಆಕಾಶ ನೀಲಿಯು ಎಂದೂ ಬರಿದಾಗುವದಿಲ್ಲ.

ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತವೆ
ಭೂಮಿಯ ಒಗಟೆ ಆಕಾಶದ ಗೀತೆ
ಸ್ವಾತಂತ್ರ್‍ಯ ಬೇಕಿದ್ದರೆ ಆವಿಯಾಗಿ ಮೋಡ
ಬೀಜಗಳು ಕಟ್ಟಿ ಬಯಲು ತುಂಬ
ನಿರಾಕಾರದ ಆಕಾರಗಳು ಎಂದೂ ನಿಂತಲ್ಲಿ ನಿಲ್ಲುವದಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಗು ನನ್ನ ಉಷೆ!
Next post ನಮ್ಮ ಬಾಪೂ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys